• 26 ಜುಲೈ 2024

ಮುಳ್ಳೇರಿಯಾ ಸೊಸೈಟಿಯಲ್ಲಿ 4.76 ಕೋಟಿ ರೂ ವಂಚನೆ – ಬ್ಯಾಂಕ್ ಕಾರ್ಯದರ್ಶಿ ಹಾಗೂ ಆತನ ಸ್ನೇಹಿತನ ಬಂಧನ.

 ಮುಳ್ಳೇರಿಯಾ ಸೊಸೈಟಿಯಲ್ಲಿ 4.76 ಕೋಟಿ ರೂ ವಂಚನೆ – ಬ್ಯಾಂಕ್ ಕಾರ್ಯದರ್ಶಿ ಹಾಗೂ ಆತನ ಸ್ನೇಹಿತನ ಬಂಧನ.
Digiqole Ad

ಮುಳ್ಳೇರಿಯಾ ಸೊಸೈಟಿಯಲ್ಲಿ 4.76 ಕೋಟಿ ರೂ ವಂಚನೆ – ಬ್ಯಾಂಕ್ ಕಾರ್ಯದರ್ಶಿ ಹಾಗೂ ಆತನ ಸ್ನೇಹಿತನ ಬಂಧನ.

ಕಾಸರಗೋಡು :ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ವೇರ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ಭಾರಿ ವಂಚನೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಕ್ರೈಂ ಬ್ರಾಂಚ್ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಸಿಪಿಐಎಂ ಪಾರ್ಟಿ ಮುಳ್ಳೇರಿಯ ಸ್ಥಳೀಯ ಸಮಿತಿ ಮಾಜಿ ಸದಸ್ಯ ಮತ್ತು ಬ್ಯಾಂಕ್‌ ಕಾರ್ಯದರ್ಶಿ ಕೆ. ರತೀಶನ್ ಹಾಗೂ ಅವನ ಸ್ನೇಹಿತ ಜಬ್ಬಾರ್ ಬಂಧಿತರಾಗಿದ್ದಾರೆ. ಈ ಆರೋಪಿಗಳು ತಮಿಳುನಾಡಿನ ನಾಮಕ್ಕಲ್‌ನ ವಸತಿಗೃಹವೊಂದರಲ್ಲಿ ತಲೆಮರೆಸಿಕೊಂಡಿದ್ದರು ಸದ್ಯ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿಗಳು ಮೊಬೈಲ್ ಬಳಸದಿದ್ದ ಕಾರಣವಾಗಿ ಪೊಲೀಸರ ತನಿಖೆಗೆ ಅಡ್ಡಿ ಉಂಟು ಮಾಡಿತ್ತು. ರತೀಶನ ಕುಟುಂಬಸ್ಥರು ಮತ್ತು ಸ್ನೇಹಿತರನ್ನು ಲಕ್ಷ್ಯವಾಗಿರಿಸಿ ಪೊಲೀಸರು ನಡೆಸಿದ ತನಿಖೆ ಮೂಲಕ ನಾಮಕ್ಕಲ್ ವಸತಿಗೃಹದಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದ ಮತ್ತು ಓಡಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು .

ಆದರೆ ಸೊಸೈಟಿಯಿಂದ ರತೀಸನ್ ಕಳ್ಳಸಾಗಣೆ ಮಾಡಿದ್ದ ಚಿನ್ನವನ್ನು ಅನಿಲ್ ಕುಮಾರ್, ಗಫೂರ್ ಮತ್ತು ಬಶೀರ್ ಎಂಬುವರ ಸಹಾಯದಿಂದ ಗಿರವಿ ಇಡಲಾಗಿತ್ತು ಎನ್ನಲಾಗಿದೆ. ಈ ಪೈಕಿ 185 ಪವನ್ ಚಿನ್ನಗಳನ್ನೂ ಕೂಡ ವಿವಿಧ ಬ್ಯಾಂಕ್‌ಗಳಿಂದ ಸೊಸೈಟಿಗೆ ವಸೂಲಿ ಮಾಡಲಾಗಿದೆ.ಇನ್ನು ಆರೋಪಿಗಳ ಬಂಧನ ವಿಳಂಬದಲ್ಲಿ ಸಿಪಿಎಂ ರಾಜಕೀಯ ಸೂತ್ರ ನಡೆಸಿದೆ ಎಂಬ ಆರೋಪವೂ ಕೂಡ ಜನರಿಂದ ಕೇಳಿಬಂದಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ