• 26 ಜುಲೈ 2024

ಮಿಥುನ್ ಕುಮಾರ್ ಸೋನ ಸುಬ್ರಹ್ಮಣ್ಯ

 ಮಿಥುನ್ ಕುಮಾರ್ ಸೋನ ಸುಬ್ರಹ್ಮಣ್ಯ
Digiqole Ad

ಮಿಥುನ್ ಕುಮಾರ್ ಸೋನ ಸುಬ್ರಹ್ಮಣ್ಯ 

ರಂಗಭೂಮಿ ಕಲಾವಿದ 
ಮಿಥುನ್ ಕುಮಾರ್ ಸೋನ. ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಏನೇಕಲ್ಲು ಗ್ರಾಮ.ರಂಗಭೂಮಿ ಕಲಾವಿದರಾಗಿರುವ ಇವರು ಸುಳ್ಯ ತಾಲೂಕಿನ ಸೋಣಂಗೇರಿ ನಡುಮನೆ ಮನೆತನದ ಶ್ರೀ ಎಸ್ ಎನ್ ಮಹಾಭಲೇಶ್ವರ ಗೌಡ ಮತ್ತು ಶ್ರೀಮತಿ ರತ್ನಾವತಿ ದಂಪತಿಗಳ ಪುತ್ರ.

ಬಾಲ್ಯದಲ್ಲೇ ಚಿತ್ರಕಲೆಯಲ್ಲಿ‌ ಆಸಕ್ತಿ ಇದ್ದ ಇವರಿಗೆ 2017 ರಲ್ಲಿ ತುಳು ಸಿನಿಮಾ ಒಂದಕ್ಕೆ ಚಿಕ್ಕ ಕಲಾವಿದನಾಗಿ ನಟನೆಯನ್ನು ಮೈಗೂಡಿಸಿಕೊಂಡು ನಂತರ ತುಳು ರಂಗಭೂಮಿಗೆ ರವಿ ಎಂ ಎಸ್ ವರ್ಕಾಡಿಯವರ ಮೂಲಕ ಬಂದ ಇವರು ಎ ಕೆ ಹಿಮಕರರವರು ರಚಿಸಿದ ಅಮರ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ ನಾಟಕದಲ್ಲಿ ಬ್ರಿಟೀಶ್ ಅಧಿಕಾರಿಯ ಪಾತ್ರದಾರಿಯಾಗಿ ನಟಿಸಿದ್ದರು. ಈ ನಾಟಕವನ್ನು ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲರವರು ನಿರ್ದೇಶನ ಮಾಡಿದ್ದರು.ನಂತರ ರಂಗಾಯಣ ಪದವೀದರ ನಾಡಿನ ಯುವ ನಿರ್ದೇಶಕ ವಿದ್ದು ಉಚ್ಚಿಲ್ ನಿರ್ದೇಶನದ ಶೂದ್ರಶಿವ ನಾಟಕದಲ್ಲಿ ಶಿವನ ಪಾತ್ರಧಾರಿಯಾಗಿ ಮುಖ್ಯ ರಂಗಭೂಮಿಕೆಯಲ್ಲಿ ನಟಿಸಿ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ನಂತರ ಜ್ಞಾನಪೀಟ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ರಚನೆಯ ಸರ್ಪ ಸಂಪಿಗೆ ನಾಟಕ ದಲ್ಲಿ ಮುಖ್ಯ ಪಾತ್ರದಾರಿಯಾಗಿ ನಟಿಸಿದ್ದರು.ಈ ನಾಟಕವನ್ನು ಸುರೇಂದ್ರ ಮೋಹನ್ ಮುದ್ರಾಡಿ ನಿರ್ದೇಶನ ಮಾಡಿದ್ದರು.ಅದಲ್ಲದೇ ಅಭಿಷೇಕ್ ಭಜಗೋಳಿ ನಿರ್ದೇಶನದ ತುಳು ನಾಟಕ ಮಾದು ಮನಿಪುಜೆಯಲ್ಲಿ ಖಳನಾಯಕನಾಗಿ ಅಭಿನಯಿಸಿದ್ದರು.ಪುತ್ತೂರಿನ ಪ್ರತಿಶ್ಠಿತ ನಾಟಕ ತಂಡ ಮಕ್ಕರ್ ತಂಡದ ಮೂಲಕ ಮಂಗಳೂರಿನ ನಮ್ಮ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಬಲೆ ತೆಲಿಪಾಲೆ ಮತ್ತು ಬಲೆ ಬುಲಿಪಾಲೆಯಲ್ಲಿ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

ಭಾರತದಾದ್ಯಂತ ಪ್ರದರ್ಶನ ಕಂಡ ಡಾ. ಸರಜೂ ಕಾಟ್ಕರ್ ರಚನೆಯ, ಕರ್ನಾಟಕದ ಪ್ರಸಿದ್ದ ನಿರ್ದೇಶಕರಲ್ಲಿ ಒಬ್ಬರಾದ ಸಾಲಿಯಾನ್ ಉಮೇಶ್ ನಾರಾಯಣರವರ ನಿರ್ದೇಶನದಲ್ಲಿ ಮೂಡಿ ಬಂದ ನಾಟಕ ಅಂಬೆ ಯಲ್ಲಿ ಕಾಶಿರಾಜ ಪಾತ್ರದಾರಿಯಾಗಿ ಅನೇಕ ಜನರ ಮೆಚ್ಚುಗೆ ಅವರ ಮುಡಿಗೇರಿತು.

2023-24 ನೇ ಸಾಲಿನ ಅಂತರರಾಷ್ಟ್ರೀಯ ಸಿದ್ದಶ್ರೀ ಪಿಲ್ಮ್ ಫೆಸ್ಟಿವಲ್ – ಸಿದ್ದನಕೊಳ್ಳ ಬಾದಾಮಿಯಲ್ಲಿ ಸಿದ್ದನಕೊಳ್ಳ ಕ್ಷೇತ್ರದ ಕ್ಷೇತ್ರ ಮಹಾತ್ಮೆ ಪುನರ್ನವ ಚೇತನ ನಮ ತುಳುವೆರ್ ಕಲಾ ಸಂಘಟನೆ ನಾಟ್ಕದೂರು ಮುದ್ರಾಡಿಯ ತಂಡದಿಂದ ಪ್ರದರ್ಶಿಸಿ ಉತ್ತಮ ಅಭಿನಯಕ್ಕೆ ಲಕ್ಷಾಂತರ ಜನರ ಪ್ರೀತಿ ಪಾತ್ರರಾಗಿದ್ದು ಮಾತ್ರವಲ್ಲದೇ ಶ್ರೀ ಕ್ಷೇತ್ರ ಸಿದ್ದನಕೊಳ್ಳ ಶ್ರೀಗಳು ಡಾ. ಶಿವಕುಮಾರ ಸ್ವಾಮಿಗಳಿಂದ ಸನ್ಮಾನಿಸಲ್ಪಟ್ಟಿದ್ದರು.

ಸಂಸಾರ ಕಲಾವಿದರು ಪುತ್ತೂರು, ಸಂಸಾರ ಕಲಾವಿದರು ವಿಟ್ಲ, ಜರ್ನಿ ಥಿಯೇಟರ್ ಮಂಗಳೂರು, ನಮ ತುಳುವೆರ್ ಕಲಾ ಸಂಘಟನೆ ನಾಟ್ಕದೂರು ಮುದ್ರಾಡಿಯ ತಂಡದಲ್ಲಿದ್ದು ಇವರು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಾದ್ಯಂತ 400 ಕ್ಕೂ ಹೆಚ್ಚು ಜನಜಾಗೃತಿ ಬೀದಿನಾಟಕ ಪ್ರದರ್ಶನ ನೀಡಿದ್ದು ಹೆಮ್ಮೆಯ ಸಂಗತಿ.ರಂಗಭೂಮಿ, ಜಾಹೀರಾತು, ಕಿರುಚಿತ್ರ, ಟೆಲಿಪಿಲ್ಮ್ , ಆಲ್ಬಾಂ ಸಾಂಗಿನಲ್ಲಿ ನಟಿಸಿದ ಇವರು ಭಾರತದ ರಂಗಭೂಮಿ, ಸಿನಿಮಾ, ದಾರವಾಹಿಗಳಲ್ಲಿ , ರಂಗ ಭೂಮಿಗೆ ಅತ್ಯುತ್ತಮ ಕಲಾವಿದನಾಗಿ ಕೊಡುಗೆ ನೀಡಬೇಕು ಎಂಬ ಚಲಗಾರನಾಗಿದ್ದಾರೆ.

ಪ್ರಸ್ತುತ ಇವರು ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕಟ್ಟ – ಗೋವಿಂದನಗರ ಎಂಬ ಪುಟ್ಟ ಹಳ್ಳಿಯಲ್ಲಿ ವಾಸವಾಗಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ