ದಕ್ಷಿಣ ಕನ್ನಡದಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ
![ದಕ್ಷಿಣ ಕನ್ನಡದಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ](https://goldfactorynews.com/wp-content/uploads/2024/03/IMG-20240318-WA0007-639x474-1-1-jpg.webp)
![Digiqole Ad](https://goldfactorynews.com/wp-content/uploads/2023/04/crust-puttur.gif)
ದಕ್ಷಿಣ ಕನ್ನಡದಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ
ಕೊಡಗು ಗಡಿಭಾಗ ಕೂಜಿಮಲೆಯಲ್ಲಿ ಕಾಣಿಸಿಕೊಂಡಿದ್ದ ನಕ್ಸಲರು ಇದೀಗ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಕಾಡಿನಂಚಿನ ಮನೆಗೆ ಬಂದು ಹೋಗಿರುವ ಮಾಹಿತಿ ಲಭಿಸಿದೆ. ಶನಿವಾರ ಸಂಜೆ 6 ಗಂಟೆಗೆ 5ಮಂದಿ ಶಂಕಿತರ ತಂಡ ತೋಟದಲ್ಲಿದ್ದ ಕೆಲಸದವರ ಶೆಡ್ಗೆ ಆಗಮಿಸಿದ್ದು, ಬಳಿಕ ಮಾಲೀಕರ ಮನೆಗೂ ಬಂದು ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಅವರೊಂದಿಗೆ ಮಾತುಕತೆ ನಡೆಸಿ 2ಕೆಜಿ ಅಕ್ಕಿಯನ್ನೂ ಪಡೆದು ಹೋಗಿದೆ. ನಕ್ಸಲರು ಬಂದ ಪ್ರದೇಶ ಕುಮಾರ ಪರ್ವತದ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಕೂಜಿಮಲೆಗೂ ಈ ಪ್ರದೇಶಕ್ಕೂ 25ಕಿಮೀ. ಮಾತ್ರ ಅಂತರವಿದೆ.
![Digiqole Ad](https://goldfactorynews.com/wp-content/uploads/2023/10/goldfactory_self.gif)