• 27 ಜುಲೈ 2024

ಅಡಿಕೆ ತೋಟಕ್ಕೆ ಕಳೆನಾಶಕ ಹಾಕಬೇಕಾ ಬೇಡವಾ? ಇಲ್ಲಿದೆ ನೋಡಿ ಉತ್ತರ

 ಅಡಿಕೆ ತೋಟಕ್ಕೆ ಕಳೆನಾಶಕ ಹಾಕಬೇಕಾ ಬೇಡವಾ? ಇಲ್ಲಿದೆ ನೋಡಿ ಉತ್ತರ
Digiqole Ad

ಅಡಿಕೆ ತೋಟಕ್ಕೆ ಕಳೆನಾಶಕ ಹಾಕಬೇಕಾ ಬೇಡವಾ? ಇಲ್ಲಿದೆ ನೋಡಿ ಉತ್ತರ

ಇಂದು ಕೃಷಿಕರು ಅಡಿಕೆ ತೋಟಗಳಿಗೆ ಹೆಚ್ಚು ಅವಲಂಬಿತರಾಗಿದ್ದಾರೆ. ಹೌದು ಅಡಿಕೆ ತೋಟವನ್ನು ಸರಿಯಾದ ಕ್ರಮದಲ್ಲಿ ಪೋಷಣೆ ಮಾಡಿದರೆ ಹೆಚ್ಚಿನ ಲಾಭವನ್ನು ಸಹ ಪಡೆಯಬಹುದಾಗಿದೆ. ಇಂದು ಕೃಷಿಯನ್ನು ಯಾವ ರೀತಿ ಮಾಡಬೇಕು? ಲಾಭ ಯಾವ ರೀತಿ ಗಳಿಸಬಹುದು ಇತ್ಯಾದಿ ವಿಷಯಗಳ ಬಗ್ಗೆ ಕೃಷಿ ಪರಿಣಿತರ ಮೂಲಕ ಸರಕಾರದ ವತಿಯಿಂದ ಮಾರ್ಗದರ್ಶನ, ಸಲಹೆ ಕೂಡ ರೈತರಿಗೆ ನೀಡಲಾಗುತ್ತಿದೆ. ಅಡಿಕೆಯನ್ನು ಬೆಳೆಯುವುದಾದರೆ ಯಾವ ಸಸಿಗಳನ್ನು ಆಯ್ಕೆ ಮಾಡಬೇಕು? ಗಿಡಗಳ ಅಂತರ ಹೇಗೆ ಇತ್ಯಾದಿ ಅಂಶಗಳ ಬಗ್ಗೆ ನೀವು ತಿಳಿದುಕೊಂಡಿರಬೇಕು.

ಈ ಸುದ್ದಿ ಓದಿದ್ದೀರಾ?:ಸರ್ಕಾರಿ ಕಚೇರಿಯಲ್ಲಿ ಹಕ್ಕಿಗಳಿಗೆ ಕುಡಿಯಲು ನೀರಿಡುವಂತೆ ಜಿಲ್ಲಾಧಿಕಾರಿ ಮುಲೈ ಮುಹಿಲನ್.ಎಂ.ಪಿ ಆದೇಶ

ಕಳೆ ನಿವಾರಣೆ ಸಿಂಪಡಣೆ:

ಅಡಿಕೆ ಬೆಳೆಗಳ ನಡುವೆ ಕಳೆಗಳು ಬೆಳೆಯುವುದರಿಂದ ಕೃಷಿಗೆ ಬಹಳಷ್ಟು ತೊಂದರೆ ಯಾಗುತ್ತದೆ‌. ಗಿಡಗಳಿಗೆ ಸರಿಯಾದ ಪೋಷಣೆ ಸಿಗದೆ ಬೇರಿನ ಪೋಷಕಾಂಶಗಳು ಕುಂಠಿತಗೊಳ್ಳುತ್ತದೆ. ಅಷ್ಟೆ ಅಲ್ಲದೆ ಕಳೆಗಳಿಂದ ಇತರ ಆಯ್ಕೆಯ ಬೆಳೆಗಳನ್ನು ಬೆಳೆಯಲು ಸಾಧ್ಯ ವಾಗುವುದಿಲ್ಲ.‌ ಹಾಗಾಗಿ ಕಳೆ ನಿವಾರಣೆಗಾಗಿ ಮದ್ದು ಸಿಂಪಡಣೆ ಮಾಡುತ್ತಾರೆ.ಈ ಮದ್ದು ಸಿಂಪಡಣೆ ಅಗತ್ಯವೇ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಅಷ್ಟಕ್ಕೂ ಕಳೆ ನಿವಾರಣೆ ಹೇಗೆ ಮಾಡಬೇಕು?

ನಿಮ್ಮ ಅಡಿಕೆ ತೋಟದಲ್ಲಿ ಅಡಿಕೆಯ ಜೊತೆ ಇತರ ಕೃಷಿಯ ಆಯ್ಕೆ ಮಾಡಿಕೊಳ್ಳಿ‌. ಅಂದರೆ ದ್ವಿದಳ ಧಾನ್ಯಗಳಾದ ಅವರೆ, ಅಲಸಂಡೆ ಇತ್ಯಾದಿ ದ್ವಿದಳ ಧಾನ್ಯ ಬೆಳೆದರೆ ಒಳ್ಳೆಯದು. ಇನ್ನು ಕಳೆ ನಿವಾರಣೆಗೆ ನೀವು ಮದ್ದು ಸಿಂಪಡಣೆ ಮಾಡಬಹುದು ಆದರೆ ಅಗತ್ಯಕ್ಕಿಂತ ಹೆಚ್ಚು ಮದ್ದು ಸಿಂಪಡಣೆ ಮಾಡಿದರೆ ಗಿಡಗಳ ಪೋಷಕಾಂಶಗಳು ಬಹಳಷ್ಟು ಕಡಿಮೆ ಯಾಗುತ್ತದೆ. ಹಾಗಾಗಿ ಅಗತ್ಯವಿದ್ದರೆ ಮಾತ್ರ ಮದ್ದು ಸಿಂಪಡಣೆ ಮಾಡಿ. ಅತಿಯಾದ ಕಳೆನಾಶಕ ಹಾನಿಕಾರಕ

ನೀವು ಅಡಿಕೆ ತೋಟಗಳಿಗೆ ಅತಿಯಾದ ಕಳೆನಾಶಕ ಮದ್ದು ಹಾಕಿದರೆ ಬೆಳೆಯುವ ಗಿಡಗಳಿಗೆ ಹಾನಿಯಾಗುತ್ತದೆ.‌ ಅದೇ ರೀತಿ ಬೆಳೆದಂತಹ ದೊಡ್ಡ ಅಡಿಕೆ ಮರಗಳಿಗೆ ಪೋಷಕಾಂಶಗಳು ಸಿಗುವುದಿಲ್ಲ‌. ಮಣ್ಣಿನಲ್ಲಿರುವ ಜೈವಿಕ ಅಂಶಗಳು ಎರೆಹುಳು, ತ್ಯಾಜ್ಯ ಇತ್ಯಾದಿಗಳ ನಾಶವಾಗುವ ಸಾಧ್ಯತೆಯಿದೆ.

ಹಾಗಾಗಿ ಅಗತ್ಯವಿದ್ದರೆ ಮಾತ್ರ ಕಳೆನಾಶಕ ಸಿಂಪಡಣೆ ಮಾಡುವುದು‌ ಅಗತ್ಯವಾಗಿದೆ.ಸರಿಯಾದ ಪೋಷಣೆ ಅಗತ್ಯ ಅಡಿಕೆ ಗಿಡಗಳ ಸರಿಯಾದ ಪೋಷಣೆ ಕೂಡ ಅಗತ್ಯವಾಗಿದೆ, ಅಂದರೆ ಬೇಸಿಗೆ ಕಾಲದಲ್ಲಿ ಗಿಡಗಳಿಗೆ ನೀರು ಬೇಕು ಎಂದು ಅತೀ ನೀರು ಬಳಕೆ ಮಾಡಬಾರದು. ‌ಇನ್ನು ರಾಸಾಯನಿಕ ಗೊಬ್ಬರ ಬಳಸದೇ ಸಾವಯವ ಗೊಬ್ಬರದ ಬಳಕೆಯ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಿ. ತೋಟದಲ್ಲೇ ಇರುವ ತ್ಯಾಜ್ಯಗಳನ್ನು ಬಳಸಿ ತೋಟದ ನಿರ್ವಹಣೆ ಮಾಡುವುದು ಸೂಕ್ತ.

ಈ ಸುದ್ದಿ ಓದಿದ್ದೀರಾ?:ಪರಂಗಿ ತೋಟಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ