• 18 ಅಕ್ಟೋಬರ್ 2024

ಅಪಘಾತದಲ್ಲಿ ಗಾಯಗೊಂಡ ಬಿಜೆಪಿ ಮೊಗರು ಬೂತ್ ಸಮಿತಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಇಡ್ಯಾಡಿಯವರಿಗೆ ಬಿಜೆಪಿ ಸವಣೂರು ಶಕ್ತಿ ಕೇಂದ್ರದ ವತಿಯಿಂದ ಧನಸಹಾಯ

 ಅಪಘಾತದಲ್ಲಿ ಗಾಯಗೊಂಡ ಬಿಜೆಪಿ ಮೊಗರು ಬೂತ್ ಸಮಿತಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಇಡ್ಯಾಡಿಯವರಿಗೆ ಬಿಜೆಪಿ ಸವಣೂರು ಶಕ್ತಿ ಕೇಂದ್ರದ ವತಿಯಿಂದ ಧನಸಹಾಯ
Digiqole Ad

ಅಪಘಾತದಲ್ಲಿ ಗಾಯಗೊಂಡ ಬಿಜೆಪಿ ಮೊಗರು ಬೂತ್ ಸಮಿತಿಯ ಮಾಜಿ ಅಧ್ಯಕ್ಷರಾದ ಜಗದೀಶ್ ಇಡ್ಯಾಡಿಯವರಿಗೆ ಬಿಜೆಪಿ ಸವಣೂರು ಶಕ್ತಿ ಕೇಂದ್ರದ ವತಿಯಿಂದ ಧನಸಹಾಯ

ಬಿಜೆಪಿ ಮೊಗರು ಬೂತ್ ನ ಮಾಜಿ ಅಧ್ಯಕ್ಷರಾದ ಜಗದೀಶ್ ಇಡ್ಯಾಡಿ ಇವರು ಬೈಕ್ ನಲ್ಲಿ ಚಲಾಯಿಸುತ್ತಿದ್ದ ವೇಳೆ ನಾಯಿಯೊಂದು ಅಡ್ಡ ಬಂದು ಬೈಕ್ ಮಗುಚಿದ ಪರಿಣಾಮ, ಕಾಲಿಗೆ ಗಂಭೀರ ಗಾಯಗೊಂಡು 2ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು
ಕೇವಲ ಗಾರೆ ಕೆಲಸದಿಂದ ಜೀವನ ನಡೆಸುತ್ತಿರುವ ಇವರಿಗೆ ಈ ಕಷ್ಟದ ಸಂಧರ್ಭದಲ್ಲಿ ಬಿಜೆಪಿ ಶಕ್ತಿಕೇಂದ್ರ ಸವಣೂರು ಇದರ ವತಿಯಿಂದ ಧನಸಹಾಯ ನೀಡಲಾಯಿತು.
ಈ ಸಂಧರ್ಭದಲ್ಲಿ ಸವಣೂರು ಶಕ್ತಿಕೇಂದ್ರದ ಅಧ್ಯಕ್ಷರಾದ ಚೇತನ್ ಕೊಡಿಬೈಲ್, ಸುಳ್ಯ ಮಂಡಲ ಎಸ್.ಟಿ. ಮೋರ್ಚಾದ ಅಧ್ಯಕ್ಷರಾದ ಗಂಗಾಧರ ಪೆರಿಯಡ್ಕ, ಸುಳ್ಯ ಮಂಡಲ ಸಮಿತಿಯ ಸದಸ್ಯರಾದ ತಾರಾನಾಥ ಕಾಯರ್ಗ, ಮೊಗರು ಬೂತ್ ಸಮಿತಿ ಅಧ್ಯಕ್ಷರಾದ ರಾಜೇಶ್ ಇಡ್ಯಾಡಿ, ಕಾರ್ಯದರ್ಶಿ ಹಿತೇಶ್ ಮೆದು, ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೊಡಿಬೈಲ್, ಕಾರ್ಯಕರ್ತರಾದ ದಯಾನಂದ ಮೆದು, ಶೋಧನ್ ಬೆಳಂದೂರು ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ