• 27 ಜುಲೈ 2024

ಆರ್‌ಸಿಬಿ ವನಿತೆಯರಿಗೆ ಚೊಚ್ಚಲ ಟ್ರೋಫಿ; ಬೆಂಗಳೂರಲ್ಲಿ ಮುಗಿಲು ಮುಟ್ಟಿದ ವಿಜಯದ ಸಂಭ್ರಮ.

 ಆರ್‌ಸಿಬಿ ವನಿತೆಯರಿಗೆ ಚೊಚ್ಚಲ ಟ್ರೋಫಿ; ಬೆಂಗಳೂರಲ್ಲಿ ಮುಗಿಲು ಮುಟ್ಟಿದ ವಿಜಯದ ಸಂಭ್ರಮ.
Digiqole Ad

ಆರ್‌ಸಿಬಿ ವನಿತೆಯರಿಗೆ ಚೊಚ್ಚಲ ಟ್ರೋಫಿ; ಬೆಂಗಳೂರಲ್ಲಿ ಮುಗಿಲು ಮುಟ್ಟಿದ ವಿಜಯದ ಸಂಭ್ರಮ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.19 ರಾತ್ರಿ ನಡೆದ  ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ನಮ್ಮ RCB ವನಿತೆಯರು ಚೊಚ್ಚಲ ಟ್ರೋಫಿ ಹಿಡಿದು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಜಯೋತ್ಸವವನ್ನು ಆಚರಿಸಿದರು. ಕಿಕ್ಕಿರಿದು ತುಂಬಿದ್ದ ಜನಸಾಗರದ ಜೊತೆ ಚೊಚ್ಚಲ ಟ್ರೋಫಿ ಅನಾವರಣದ ಸಂಭ್ರಮವೂ ಮುಗಿಲು ಮುಟ್ಟಿತ್ತು.

ಈ ಸುದ್ದಿಯನ್ನು ಓದಿದ್ದೀರಾ.?ಫಾಲಿ ನಾರಿಮನ್ ಯುಗಾಂತ್ಯ!

ಈ ಜನ ಸಾಗರದ ಮದ್ಯೆ RCB ಪುರುಷರ ತಂಡವು ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಂಡರು. ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಅವರು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಅದರಲ್ಲೂ ಕನ್ನಡದಲ್ಲೇ “ಇದು ಆರ್‌ಸಿಬಿಯ ಹೊಸ ಅಧ್ಯಾಯ” ಅಂತ ಹೇಳಿದ್ದಾರೆ. ಮಾರ್ಚ್ 22ರಿಂದ ಐಪಿಎಲ್ ಸೀಸನ್ 17 ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿದೆ.

ಈ ಮೆಗಾ ಟೂರ್ನಿಗೂ ಮುನ್ನವೇ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತ ಹೆಸರು ಬದಲಿಸಿದ ಬಳಿಕ ಹಾಗೂ ಜೆರ್ಸಿ ಕಲರ್ ಬದಲಾದ ಬಳಿಕ ಕೊಹ್ಲಿ ಇದು ಆರ್‌ಸಿಬಿಯ ಹೊಸ ಅಧ್ಯಾಯ ಅಂತ ಕನ್ನಡದಲ್ಲೇ ಹೇಳಿ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ. ವಿರಾಟ್ ಈ ರೀತಿ ಖಡಕ್ ಹೇಳಿಕೆ ಕೊಟ್ಟಿರೋದು ನೋಡಿದ್ರೆ ಈ ಸಲ ಕಪ್ ನಮ್ಮದಾಗೋದ್ರಲ್ಲಿ ಅನುಮಾನವೇ ಬೇಡ ಅಂತಿದ್ದಾರೆ ಫ್ಯಾನ್ಸ್. ಇನ್ನು ಕಿಂಗ್ ಅಂತ ಕರಿಬೇಡಿ ಮುಜುಗರ ಆಗುತ್ತೆ ಅಂತ ಕೊಹ್ಲಿ ನಿರೂಪಕನ ಮಾತಿಗೆ ಹೇಳಿದರು.

ಇನ್ನೂ ಕೊಹ್ಲಿಯ ಈ ಮಾತು ಎದುರಾಳಿ ತಂಡಗಳಿಗೆ ವಾರ್ನಿಂಗ್ ಕೊಟ್ಟಂತಿದೆ. ಈ ಬಾರಿ ಜೆರ್ಸಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜೆರ್ಸಿಯ ಮೇಲ್ಬಾಗದಲ್ಲಿ ನೀಲಿ ಬಣ್ಣ ಹಾಗೂ ಕೆಳಭಾಗದಲ್ಲಿ ಹಿಂದಿನ ಕಡು ಕೆಂಪು ಬಣ್ಣದಿಂದ ಜೆರ್ಸಿಯನ್ನು ಡಿಸೈನ್ ಮಾಡಲಾಗಿದೆ. ರಂಗು ರಂಗಿನಿಂದ ಕೂಡಿದ್ದ ಈ ಸಮಾರಂಭವನ್ನು RCB ಅಭಿಮಾನಿಗಳು ಫುಲ್ ಖುಷಿಯಿಂದ ಕಣ್ತುಂಬಿಕೊಂಡರು.

ಈ ಸುದ್ದಿಯನ್ನು ಓದಿದ್ದೀರಾ.?ವಿಮಾನದಲ್ಲಿ ಮಿಲ್ಕ್‌ಶೇಕ್ ಕುಡಿದು ಬೆಂಗಳೂರಿನ ಉದ್ಯಮಿ ಅಸ್ವಸ್ಥ

.GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ