ತುಮಕೂರಿನಲ್ಲಿ ಸುಟ್ಟು ಕರಕಲಾದ ಕಾರು ಪತ್ತೆ; ದಕ್ಷಿಣ ಕನ್ನಡಕ್ಕೆ ಸೇರಿರಬಹುದು ಎಂಬ ಬಿಗು ಅನುಮಾನ!
ತುಮಕೂರಿನಲ್ಲಿ ಸುಟ್ಟು ಕರಕಲಾದ ಕಾರು ಪತ್ತೆ; ದಕ್ಷಿಣ ಕನ್ನಡಕ್ಕೆ ಸೇರಿರಬಹುದು ಎಂಬ ಬಿಗು ಅನುಮಾನ!
ತುಮಕೂರಿನಲ್ಲಿ ಸುಟ್ಟು ಕರಕಲಾಗಿದ್ದ ಕಾರಿನಲ್ಲಿದ್ದ ಮೂರು ಮೃತದೇಹದ ಗುರುತು ಪತ್ತೆಯಾಗಿದೆ. ಕಾರು ಬೆಳ್ತಂಗಡಿಯ ಮದ್ದಡ್ಕ ನಿವಾಸಿ ರಫೀಕ್ಗೆ ಸೇರಿದ್ದು, ಮೃತದೇಹ ಕೂಡ ಬೆಳ್ತಂಗಡಿ ನಿವಾಸಿಗಳದ್ದು. ಮೃತರು ನಡ ಗ್ರಾಮದ ಟಿಬಿ ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್(45), ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್(56) &ಶಿರ್ಲಾಲ್ ಗ್ರಾಮದ ನಿವಾಸಿ ಇಮ್ಮಿಯಾಜ್(34). ಆ ಕಾರಿನಲ್ಲಿ ಒಟ್ಟು 5 ಮಂದಿ ಇದ್ದು ಇಬ್ಬರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿಯಿದೆ. ಯಾವ ಕಾರಣಕ್ಕೆ ಕಾರು ತುಮಕೂರಿಗೆ ಹೋಗಿತ್ತು & ಕೊಲೆಯ ಹಿಂದಿನ ಕಾರಣ ಗೊತ್ತಾಗಬೇಕಿದೆ.