• 18 ಅಕ್ಟೋಬರ್ 2024

ಕೆಲವೇ ದಿನಗಳಲ್ಲಿ 34 ಕೋಟಿ ಸಂಗ್ರಹಿಸಿ ಅಬ್ದುಲ್ ರಹೀಮ್ ರನ್ನು ಬದುಕಿಸಿದ ಕೇರಳದ ಜನ

 ಕೆಲವೇ ದಿನಗಳಲ್ಲಿ 34 ಕೋಟಿ ಸಂಗ್ರಹಿಸಿ ಅಬ್ದುಲ್ ರಹೀಮ್ ರನ್ನು ಬದುಕಿಸಿದ ಕೇರಳದ ಜನ
Digiqole Ad

ಕೆಲವೇ ದಿನಗಳಲ್ಲಿ 34 ಕೋಟಿ ಸಂಗ್ರಹಿಸಿ ಅಬ್ದುಲ್ ರಹೀಮ್ ರನ್ನು ಬದುಕಿಸಿದ ಕೇರಳದ ಜನ

ಸೌದಿ ಅರೇಬಿಯಾದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ರಕ್ಷಿಸಲು ಕೇರಳದ ಜನರು ಒಗ್ಗಟ್ಟಿನಿಂದ ಕೆಲವೇ ದಿನಗಳಲ್ಲಿ 34 ಕೋಟಿ ರೂ. ಸಂಗ್ರಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಕೋಳಿಕ್ಕೋಡ್‌ನ ಮೂಲದ ಅಬ್ದುಲ್ ರಹೀಮ್ ಎಂಬಾತ 2006ರಲ್ಲಿ ಸೌದಿ ಹುಡುಗನನ್ನು ಕೊಂದ ಆರೋಪದ ಮೇಲೆ ಕೊಲ್ಲಿ ರಾಷ್ಟ್ರದಲ್ಲಿ ಜೈಲು ಪಾಲಾಗಿದ್ದು. ಈತ 18 ವರ್ಷಗಳಿಂದ ಜೈಲಿನಲ್ಲಿದ್ದು, ಇನ್ನೇನು ಗಲ್ಲು ಶಿಕ್ಷೆಗೆ ಗುರಿಯಾಗಬೇಕಿತ್ತು.

ಈ ವೇಳೆ ರಹೀಮ್ ಬಿಡುಗಡೆಗೆ ಯತ್ನಿಸಲು ಕ್ರಿಯಾ ಸಮಿತಿ ರಚಿಸಲಾಗಿತ್ತು. ಹಣ ಸಂಗ್ರಹಿಸಲು ಹೊರಟ ಈ ಸಮಿತಿ ಐದು ದಿನಗಳ ಹಿಂದಿನವರೆಗೂ ಕೇವಲ ಅಲ್ಪ ಮೊತ್ತವನ್ನಷ್ಟೇ ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಅದೇನಾಯ್ತೋ ಏನೋ, ಅಭಿಯಾನವು ತೀವ್ರಗೊಂಡ ಬೆನ್ನಲ್ಲೇ ಪ್ರಪಂಚದಾದ್ಯಂತದ ಕೇರಳದ ಜನರು ನೆರವು ನೀಡಲು ನಾ ಮುಂದು ತಾ ಮುಂದು ಎಂದು ಧಾವಿಸಿ ಬಂದರು. ಪರಿಣಾಮ ದೊಡ್ಡ ಮೊತ್ತದ ಹಣ ಸಂಗ್ರಹವಾಯಿತು.

ಈ ಸುದ್ದಿ ಓದಿದ್ದೀರಾ?:ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

2006ರಲ್ಲಿ ಅಬ್ದುಲ್‌ ರಹೀಮ್ ಆಕಸ್ಮಿಕವಾಗಿ ತಾನು ಆರೈಕೆ ಮಾಡುತ್ತಿದ್ದ ವಿಶೇಷ ಚೇತನ ಹುಡುಗನ ಸಾವಿಗೆ ಕಾರಣವಾಗಿದ್ದ. ನಂತರ ಆತನನ್ನು ಅಲ್ಲಿನ ಪೊಲೀಸರು ಜೈಲಿಗೆ ಅಟ್ಟಿದ್ದರು. ಸೌದಿ ಬಾಲಕನ ಕುಟುಂಬವು ಕ್ಷಮಾದಾನ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ 2018ರಲ್ಲಿ ಆತನಿಗೆ ಮರಣದಂಡನೆಯೂ ವಿಧಿಸಲಾಗಿತ್ತು.

ಈ ಸಂಬಂಧ ಸಲ್ಲಿಸಿದ ಮೇಲ್ಮನವಿಗಳನ್ನೂ ಉನ್ನತ ನ್ಯಾಯಾಲಯಗಳು ತಿರಸ್ಕರಿಸಿದವು. ಕೊನೆಗೆ, ಸುರಂಗದ ಕೊನೆಯಲ್ಲೊಂದು ಕೋಲ್ಮಿಂಚು ಎಂಬಂತೆ’ಬ್ಲಡ್‌ ಮನಿ’ ಎಂದು ಕರೆಯಲಾಗುವ ಪರಿಹಾರದ ಮೊತ್ತ ಪಾವತಿಸಿದರೆ ಆತನನ್ನು ಕ್ಷಮಿಸಲು ಸಾವಿಗೀಡಾಗಿದ್ದ ಹುಡುಗನ ಕುಟುಂಬವು ಒಪ್ಪಿಕೊಂಡಿತು. ‘ಸಣ್ಣ ನಿರೀಕ್ಷೆಯೇನೋ ಸಿಕ್ಕಿತು. ಆದರೆ ಈ ಬ್ಲಡ್‌ ಮನಿ ಮೊತ್ತ ತೀರಾ ದೊಡ್ಡದಾಗಿತ್ತು’ ಎಂದು ಕ್ರಿಯಾ ಸಮಿತಿ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಂತರ ನಡೆದಿದ್ದು ಅಕ್ಷರಶಃ ಪಾವಡವೇ ಸರಿ. “ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನ 75ಕ್ಕೂ ಹೆಚ್ಚು ಸಂಸ್ಥೆಗಳು, ಕೇರಳ ಮೂಲದ ಉದ್ಯಮಿ ಬಾಬಿ ಚೆಮ್ಮನ್ನೂರ್, ರಾಜ್ಯದ ವಿವಿಧ ರಾಜಕೀಯ ಸಂಘಟನೆಗಳು, ಸಾಮಾನ್ಯ ಜನರು ನಮಗೆ ಹಣ ಸಂಗ್ರಹಿಸಲು ಸಹಾಯ ಮಾಡಿದರು,” ಎಂದು ಸಂಘಟಕರಲ್ಲೊಬ್ಬರು ಕೋಳಿಕ್ಕೋಡ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಷ್ಟೊಂದು ಮೊತ್ತವನ್ನು ಸಂಗ್ರಹಿಸಬಹುದು ಎಂದು ನಾನು ಯೋಚಿಸಿರಲಿಲ್ಲ ಎಂದು ಅವರ ತಾಯಿ ಭಾವುಕರಾಗಿ ಹೇಳಿದ್ದಾರೆ. “ನನಗೆ 34 ಕೋಟಿ ರೂ. ಸಂಗ್ರಹಿಸಲು ಯಾವುದೇ ಮಾರ್ಗವಿಲ್ಲದ ಕಾರಣ, ಮಗನನ್ನು ಉಳಿಸಿಕೊಳ್ಳುವ ಯಾವುದೇ ಭರವಸೆ ಇರಲಿಲ್ಲ. ಆದರೆ ಹೇಗೋ ಇದೆಲ್ಲ ಸಾಧ್ಯವಾಯಿತು,” ಎಂದು ಅವರು ದುಃಖದಲ್ಲೇ ನುಡಿದಿದ್ದಾರೆ.

ಹಣ ಸಂಗ್ರಹಿಸಲು ಬಾಬಿ ಚೆಮ್ಮನೂರು ಕಳೆದ ಕೆಲವು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅವರು ತಮ್ಮ ಉತ್ಪನ್ನಗಳ ಮಾರಾಟವನ್ನು ಸಹ ಆಯೋಜಿಸಿದರು. ಇದರಿಂದ ಬಂದ ಸಂಪೂರ್ಣ ಹಣವನ್ನು ಅವರು ರಹೀಮ್‌ ಬಿಡುಗಡೆಗಾಗಿ ದೇಣಿಗೆ ನೀಡಿದ್ದರು. ಈ ವಿಷಯದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಕ್ರಿಯಾ ಸಮಿತಿಯು ಮೊಬೈಲ್ ಆಪ್‌ನ್ನು ಸಹ ರಚಿಸಿತ್ತು.

ಎಲ್ಲರ ಸಂಘಟಿತ ಪ್ರಯತ್ನದಿಂದ ಅಬ್ದುಲ್‌ ರಹೀಮ್‌ ಈಗ ಗಲ್ಲು ಶಿಕ್ಷೆಯಿಂದ ಪಾರಾಗುವ ಸಂದರ್ಭ ಒದಗಿ ಬಂದಿದೆ. ಅಬ್ದುಲ್ ರಹೀ ಮನನು ಉಳಿಸಲು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮೊಬೈಲಿಗೆ ಒಂದು ಆಪನ್ನು ಕೊಡ ರಚಿಸಿ ದೇಣಿಗೆಯನ್ನು ಸಹಾಯ ಯಾಚಿಸಿದ್ದರು ಕೇರಳಿಗರ ಸತತಶ್ರಮ ಹಾಗೂ ಹಲವು ಜನರ ದಾನದಿಂದ ಇಂದು ಅಬ್ದುಲ್ ರಹೀಮ್ ರವರು ಗಲ್ಲು ಶಿಕ್ಷೆಯಿಂದ ಪಾರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ?:ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ‘ಡಾ. ಬಿ. ಆರ್ ಅಂಬೇಡ್ಕ‌ರ್ ಜಯಂತಿ’ ಆಚರಿಸಿ ರಾಜ್ಯ ಸರ್ಕಾರ ಆದೇಶ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ