ನವಜಾತ ಶಿಶುವನ್ನು ಚರಂಡಿಗೆಸೆದ ಕೃತ್ಯ – ತಾಯಿಗಾಗಿ ಪೊಲೀಸರ ಶೋಧ.
![ನವಜಾತ ಶಿಶುವನ್ನು ಚರಂಡಿಗೆಸೆದ ಕೃತ್ಯ – ತಾಯಿಗಾಗಿ ಪೊಲೀಸರ ಶೋಧ.](https://goldfactorynews.com/wp-content/uploads/2024/05/IMG-20240516-WA0021.jpg)
![Digiqole Ad](https://goldfactorynews.com/wp-content/uploads/2023/04/crust-puttur.gif)
ನವಜಾತ ಶಿಶುವನ್ನು ಚರಂಡಿಗೆಸೆದ ಕೃತ್ಯ – ತಾಯಿಗಾಗಿ ಪೊಲೀಸರ ಶೋಧ.
ವಿಜಯಪುರ : ನವಜಾತ ಶಿಶುವನ್ನು ಕ್ರೋರಿ ತಾಯಿಯೊಬ್ಬಳು ಚರಂಡಿಯಲ್ಲಿ ಬಿಸಾಡಿ ಪರಾರಿಯಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಅಲಕೊಪ್ಪರ ಗ್ರಾಮದಲ್ಲಿ ಘಟನೆ ನಡೆದಿದೆ. ಪಾಪಿ ಹೆತ್ತಮ್ಮ ಹಸುಗೂಸು ಮಗುವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿ ಚರಂಡಿಗೆ ಎಸೆದು ಪರಾರಿಯಾಗಿದ್ದಾಳೆ. ಚರಂಡಿಯಲ್ಲಿರುವ ಮಗುವನ್ನ ಕಂಡು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಮಗು ಸಾವನ್ನಪ್ಪಿರುವುದನ್ನು ಕಂಡು ಗ್ರಾಮಸ್ಥರು ಹಸುಗೂಸನ್ನು ಎಸೆದು ಪರಾರಿಯಾದ ತಾಯಿಯನ್ನು ಪತ್ತೆ ಮಾಡುವಂತೆ ಆಗ್ರಹಿಸಿದ್ದಾರೆ. ಗ್ರಾಮಸ್ಥರು ಹೆತ್ತಮ್ಮಳ ವಿರೋದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದ ಮುದ್ದೇಬಿಹಾಳ ಪೊಲೀಸರು ನವಜಾತ ಶಿಶುವಿನ ಕ್ರೂರಿ ಹೆತ್ತಮ್ಮನಿಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ?ಲಾಕೆಟ್ ನಲ್ಲಿ ‘ಕ್ಯೂಆರ್ ಕೋಡ್’ : 6 ಗಂಟೆಗಳ ಒಳಗೆ ಮನೆಗೆ ಮರಳಿದ ಕಾಣೆಯಾದ ಮಗು!
![Digiqole Ad](https://goldfactorynews.com/wp-content/uploads/2023/10/goldfactory_self.gif)