• 27 ಜುಲೈ 2024

ಧರ್ಮಸ್ಥಳ ಯೋಜನೆಯಿಂದ ನಾಲ್ಕು ಲಕ್ಷ ವಿಮಾ ಸೌಲಭ್ಶ ಮಂಜೂರಾತಿ ಪತ್ರ ವಿತರಣೆ.

 ಧರ್ಮಸ್ಥಳ ಯೋಜನೆಯಿಂದ ನಾಲ್ಕು ಲಕ್ಷ ವಿಮಾ ಸೌಲಭ್ಶ ಮಂಜೂರಾತಿ ಪತ್ರ ವಿತರಣೆ.
Digiqole Ad

ಧರ್ಮಸ್ಥಳ ಯೋಜನೆಯಿಂದ ನಾಲ್ಕು ಲಕ್ಷ ವಿಮಾ ಸೌಲಭ್ಶ ಮಂಜೂರಾತಿ ಪತ್ರ ವಿತರಣೆ.

 ಕಡಬ ಮೇ.23: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನ ಕಡಬ ವಲಯದ ಅಡ್ಡಗದ್ದೆ ಕಾರ್ಯಕ್ಷೇತ್ರದ ಶಕ್ತಿ ಪ್ರಗತಿಬಂಧು ಸ್ವಸಹಾಯ ಸಂಘಕ್ಕೆ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ವತಿಯಿಂದ ಮಂಜೂರಾದ ನಾಲ್ಕು ಲಕ್ಷದ ವರೆಗಿನ ವಿಮಾ ಸೌಲಭ್ಯದ ಮಂಜೂರಾತಿ ಪತ್ರವನ್ನು ಕಡಬ ಯೋಜನಾ ಕಛೇರಿಯಲ್ಲಿ ವಿತರಿಸಲಾಯಿತು.
ಅಡ್ಡಗದ್ದೆ ಕಾರ್ಯಕ್ಷೇತ್ರದ ಶಕ್ತಿ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯೆ ಜುರಾಬಿಯವರು ಅಲ್ಪ ಕಾಲದ ಅಸೌಖ್ಶದಿಂದ ಮರಣ ಹೊಂದಿದ್ದು, ಅವರು ತಮ್ಮ ಸಂಘದಲ್ಲಿ ಎರಡು ಲಕ್ಷ ಪ್ರಗತಿನಿಧಿಯನ್ನು ಪಡೆದಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.?ಕಾರ್ಖಾನೆಯ ಎಳನೀರು ಕುಡಿದು ಅಸ್ವಸ್ಥ ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಪರಿಶೀಲನೆ

ಹಾಗೂ ವಾರದ ಕಂತಿನಲ್ಲಿ ಮರುಪಾವತಿ ಮಾಡುವ ಒಪ್ಪಂದದಲ್ಲಿ ಪ್ರಗತಿನಿಧಿ ಪಡೆದು ಸಂಘದ ಮೂಲಕ ರೂ ಎರಡು ಲಕ್ಷದ ಮೈಕ್ರೋಬಚಾತ್ ವಿಮಾ ಪಾಲಿಸಿಯನ್ನು ಮಾಡಿಕೊಂಡಿದ್ದರು. ಪಡೆದ ಸಾಲವನ್ನು ಪ್ರಗತಿ ರಕ್ಷಾ ಕವಚ ವಿಮೆಯ ಮೂಲಕ ಸಂಪೂರ್ಣ ಮನ್ನಾ ಮಾಡಲಾಗಿದ್ದು, ಮೈಕ್ರೋಬಚಾತ್ ವಿಮಾ ಸೌಲಭ್ಯ ರೂ 2ಲಕ್ಷ ಹಾಗೂ ಪಡೆದ ಪ್ರಗತಿನಿಧಿ ಸಾಲದ ಮನ್ನಾ ಮಾಡುವ ಮಂಜೂರಾತಿ ಪತ್ರವನ್ನು ಜೂರಾಬಿರವರ ನಾಮಿನಿದಾರರಾದ ಮಗ ಹಚ್ ಶೇಕ್ ನೂರು ಮಹಮ್ಮದ್ ರವರಿಗೆ ಯೋಜನಾ ಕಛೇರಿಯಲ್ಲಿ ವಿತರಿಸಲಾಯಿತು.

ಈ ಸುದ್ದಿಯನ್ನು ಓದಿದ್ದೀರಾ.?ಇತಿಹಾಸ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಪ್ರಸನ್ನ ಎನ್.ಎಚ್ ಆಯ್ಕೆ

ವಿಮಾ ಸೌಲಭ್ಶವನ್ನು ವಿತರಿಸಿದ ಕಡಬ ಯೋಜನಾ ಕಛೇರಿಯ ಹಣಕಾಸು ಪ್ರಭಂಧಕಿ ಶ್ರೀಮತಿ ಸುಜಾತರವರು ಮಾತನಾಡಿ, ಸಂಘದಲ್ಲಿ ಪ್ರಗತಿನಿಧಿ ಸಾಲ ಪಡೆದುಕೊಂಡ ಪ್ರತಿಯೊಬ್ಬ ಸದಸ್ಯನಿಗೆ ಹಾಗೂ ಅದನ್ನು ವಿನಿಯೋಗ ಮಾಡಿದ ಮನೆಯ ಜವಾಬ್ದಾರಿ ವ್ಶಕ್ತಿ ವಿನಿಯೋಗದಾರರಿಗೆ ಒಟ್ಟಾಗಿ 1000 ಕ್ಕೆ 12ರೂಪಾಯಿ ಮೊತ್ತ ವನ್ನು ವಿಮಾ ಮೊತ್ತವಾಗಿ ಪಡೆದು, ಸಾಲಕ್ಕೆ ಭದ್ರತೆ ಮಾಡಿಕೊಂಡಿದ್ದು, ತಾಲೂಕಿನಲ್ಲಿ ಒಟ್ಟು 49 ಸದಸ್ಯರಿಗೆ ಮರಣ ಸಂದರ್ಭ 98,46,000ಮೊತ್ತದ ಸಾಲ ಮನ್ನಾ ಮಾಡಿ ಕುಟುಂಬದಲ್ಲಿ ನೆಮ್ಮದಿ ತರುವಲ್ಲಿ ಸಹಕಾರಿಯಾಗಿದೆ.
ಶಕ್ತಿ ಸಂಘದ ಜೂರಾಬಿಯವರ ಮರಣ ಸಂದರ್ಭದಲ್ಲಿಯೂ ಅವರು ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಲ್ಲಿ ಸಹಕಾರಿಯಾಗಿದೆ. ಜೂರಾಬಿಯವರು ತಮ್ಮ ಜೀವನದ ಭದ್ರತೆಗಾಗಿ ಸಂಘದ ಮೂಲಕ ಮಾಡಿರುವ ಮೈಕ್ರೋಬಚಾತ್ ವಿಮಾ ಪಾಲಿಸಿಯಿಂದ ವಿಮಾ ಸೌಲಭ್ಯವಾಗಿ ಅವರ ನಾಮಿನಿದಾರರಿಗೆ ರೂ 2ಲಕ್ಷ ಮೊತ್ತದ ಆರ್ಥಿಕ ನೆರವು ಲಭಿಸಲು ಅನುಕೂಲವಾಗಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಒಂಟಿ ಕೋತಿಯ ತಂಟೆಯಿಂದ ಮಹಿಳೆ ಆಸ್ಪತ್ರೆಗೆ!

ಜೂರಾಬಿಯವರು ಸಂಘದಲ್ಲಿ ಮಾಡಿದ ಉಳಿತಾಯ ಹಾಗೂ ವಿಮಾ ಸೌಲಭ್ಯ ಸೇರಿ ಕುಟುಂಬಕ್ಕೆ ಒಟ್ಟು ನಾಲ್ಕು ಲಕ್ಷದ ವರೆಗಿನ ಸೌಲಭ್ಯವನ್ನು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಸ್ವಸಹಾಯ ಸಂಘಗಳ ಕಾರ್ಯಕ್ರಮಗಳ ಮೂಲಕ ನೀಡಿರುವುದು ಅವರ ಕುಟುಂಬದ ಆರ್ಥಿಕ ಸಂಕಷ್ಟವನ್ನು ದೂರವಾಗಿಸಿ ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
ಈ ಸಂಧರ್ಭದಲ್ಲಿ ಕಛೇರಿ ಸಹಾಯಕ ಆಡಳಿತ ಪ್ರಭಂದಕಿ ಶ್ರೀಮತಿ ಚೈತ್ರ ಸೇವಾಪ್ರತಿನಿಧಿ ನಳಿನಿ, ಸುಗುಣ ,ಸರಿತಾ ಅಡ್ಡಗದ್ದೆ ಒಕ್ಕೂಟದ ಅಧ್ಶಕ್ಷರು ದೇವಣ್ಣಗೌಡ ಪಧಾದಿಕಾರಿಯಾದ ರೂಪಾ ಉಪಸ್ಥಿತರಿದ್ದರು…ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ವಿಮಾ ಸೌಲಭ್ಯ ದೊರೆಯುವಲ್ಲಿ ಸಹಕರಿಸಿದರು.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ