ಧರ್ಮಶ್ರೀ ಸಭಾಭವನ ಉದ್ಘಾಟನೆ : ಇಚ್ಲಂಪಾಡಿ
![ಧರ್ಮಶ್ರೀ ಸಭಾಭವನ ಉದ್ಘಾಟನೆ : ಇಚ್ಲಂಪಾಡಿ](https://goldfactorynews.com/wp-content/uploads/2023/06/IMG-20230613-WA0005-850x560.webp)
![Digiqole Ad](https://goldfactorynews.com/wp-content/uploads/2023/04/crust-puttur.gif)
ಇಚ್ಲಂಪಾಡಿ: ಧರ್ಮಶ್ರೀ ಸಭಾಭವನ ಉದ್ಘಾಟನೆ ಮತ್ತು ಶಾಸಕರಿಗೆ ಅಭಿನಂದನೆ.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ. ಸಿ. ಟ್ರಸ್ಟ್ ಕಡಬ ತಾಲೂಕು,
ನೆಲ್ಯಾಡಿ ವಲಯದ ವತಿಯಿಂದ ಬೀಡು ಇಚಿಲಂಪಾಡಿಯಲ್ಲಿ ನವೀಕರಣಗೊಂಡ ಧರ್ಮಶ್ರೀ ಸಭಾಭವನ ಉದ್ಘಾಟನಾ ಸಮಾರಂಭ ಮತ್ತು ಜ್ಞಾನ ವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರನ್ನು ಸಂಘದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಈಶ್ವರ ಪ್ರಸಾದ್ ಶಾಸ್ತ್ರೀ, ಶುಭಕರ ಹೆಗ್ಗಡೆ, ಮೇದಪ್ಪ ಗೌಡ, ವನಿತಾ ಎಂ, ಭಾಸ್ಕರ ಗೌಡ, ಚೆನ್ನಪ್ಪ ಗೌಡ, ಶ್ರೀ ಕ್ಷೇ.ಧ.ಗ್ರಾ.ಯೋ. ಇಚಿಲಂಪಾಡಿಯಲ ಒಕ್ಕೂಟದ ಸದಸ್ಯರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬೀಡು ಇಚಿಲಂಪಾಡಿಯ ಇದರ ಸರ್ವ ಸದ್ಯಸರು, ಸ್ಥಳೀಯರು ಉಪಸ್ಥಿತರಿದ್ದರು.
![Digiqole Ad](https://goldfactorynews.com/wp-content/uploads/2023/10/goldfactory_self.gif)