• 27 ಜುಲೈ 2024

ಕಡಬ ವಲಯದ ನೂತನ ಭಜನಾಪರಿಷತ್ ಸಮಿತಿ ರಚನೆ.

 ಕಡಬ ವಲಯದ ನೂತನ ಭಜನಾಪರಿಷತ್ ಸಮಿತಿ ರಚನೆ.
Digiqole Ad

ಕಡಬ ವಲಯದ ನೂತನ ಭಜನಾಪರಿಷತ್ ಸಮಿತಿ ರಚನೆ.

ಅಧ್ಶಕ್ಷರು ರಮೇಶ್ ಗೌಡ ಅಡೀಲು

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ನೂತನ ಭಜನಾ ಪರಿಷತ್ ರಚನೆಯ ಕಾರ್ಯಕ್ರಮವು ನಡೆಯಿತು.

ಉಪಾಧ್ಯಕ್ಷರು ಸೌಮ್ಯ ಕಾಡುಮನೆ

ಕಡಬ ವಲಯದ ಕಡಬ ಪಟ್ಟಣಪಂಚಾಯತ್ ˌ ಕುಟ್ರುಪ್ಪಾಡಿ ಗ್ರಾಮಪಂಚಾಯತ್ ಹಾಗೂ ನೂಜಿಬಾಳ್ತಿಲ ಗ್ರಾಮಪಂಚಾಯತ್ ವ್ಶಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಜನಾಮಂಡಳಿಗಳ ಪಧಾದಿಕಾರಿಗಳಿಗೆ ಹಾಗೂ ಆಸಕ್ತ ಸದಸ್ಶರಿಗೆ ವಲಯಮಟ್ಟದ ಭಜನಾ ಮಂಡಳಿ ಸಭೆಯನ್ನು ಆಯೋಜಿಸಲಾಯಿತು.

ಈ ಸುದ್ದಿಯನ್ನು ಓದಿದ್ದೀರಾ.?ರುದ್ರಭೂಮಿ ಮೇಲೆ ಕಾಡಾನೆಗಳ ರೌದ್ರಾವತಾರ

ಕಾರ್ಯದರ್ಶಿ -ಪ್ರೇಮಾ ವಿದ್ಯಾನಗರ

ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ಯನ್ ರವರು ಸಭೆಯನ್ನು ಉಧ್ಘಾಟಿಸಿ ಮಾತನಾಡಿ ಭಜನೆಯು ಜನರ ಭಾವನೆಗಳ ವಿಭಜನೆಯನ್ನು ತಪ್ಪಿಸಿ ಭಕ್ತಿಯ ಮಾರ್ಗವನ್ನು ತೋರಿಸಿ ಸಜ್ಜನಿಕೆಯನ್ನು ಮೂಡಿಸುವ ಶಕ್ತಿಯಾಗಿದೆ.

ಕೋಶಾಧಿಕಾರಿ =ಉಮೇಶ್ ಕೆರೆಕೋಡಿ

ಭಜನೆಯು ಪ್ರತಿ ಮನೆಯಲ್ಲಿ ಪ್ರತಿಯೊಬ್ಬರ ಮನದಲ್ಲಿ ಶಾಶ್ವತವಾಗಿರಬೇಕೆನ್ನುವ ದೂರದೃಷ್ಟಿತ್ವದಲ್ಲಿ ಪೂಜ್ಶ ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿರುವ ಭಜನಾಪರಿಷತ್ ತಾಲೂಕಿನಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿದೆ.ಇದು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನವಾಗಬೇಕೆನ್ನುವ ಉದ್ದೇಶದಿಂದ ವಲಯಮಟ್ಟದಲ್ಲಿ ನೂತನವಾಗಿ ಭಜನಾಪರಿಷತ್ ಸಮಿತಿ ರಚನೆಯಾಗಬೇಕಿದೆ ಎಂದರು.

ಜತೆ ಕಾರ್ಯದರ್ಶಿ =ಸುಂದರ ಪೂಜಾರಿ .

ಕಡಬ ವಲಯದ ಎಲ್ಲಾ ಭಜನಾಮಂಡಳಿಗಳ ಆಸಕ್ತ ಪ್ರತಿನಿಧಿಗಳು ಹಾಗೂ ಸದಸ್ಯರುಗಳ ಸಮ್ಮುಖದಲ್ಲಿ ವಲಯ ಭಜನಾಪರಿಷತ್ತ್ ರಚನೆಗೊಂಡಿತು. ಕಡಬ ವಲಯದ ನೂತನ ಭಜನಾಪರಿಷತ್ತ್ ಅಧ್ಶಕ್ಷರಾಗಿ ಮೂರಾಜೆಕೊಪ್ಪ ಶ್ರೀ ಅಯ್ಶಪ್ಪ ಸ್ವಾಮಿ ಭಜನಾಮಂಡಳಿ ಅಧ್ಶಕ್ಷರಾದ ರಮೇಶ್ ಅಡೀಲು ಉಪಾಧ್ಶಕ್ಷರಾಗಿ, ಬದಿಬಾಗಿಲು ಶಿವಪಾರ್ವತಿ ಮಹಿಳಾ ಭಜನಾಮಂಡಳಿ ಅಧ್ಯಕ್ಷೆ ಶ್ರೀಮತಿ ಸೌಮ್ಶ ಕಾರ್ಯದರ್ಶಿಯಾಗಿ, ಕಡಬ ಜಯದುರ್ಗಾ ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಪ್ರೇಮ, ಜತೆಕಾರ್ಯದರ್ಶಿಯಾಗಿ ಕಡಬ ಯುವ ವಾಹಿನಿ ಭಜನಾಮಂಡಳಿ ಅಧ್ಶಕ್ಷ ಸುಂದರ ಪೂಜಾರಿ, ಕೊಶಾಧಿಕಾರಿಯಾಗಿ ಕೇಪು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾರ್ಯದರ್ಶಿ ಉಮೇಶ್ ಕೆರೆಕೋಡಿ ಆಯ್ಕೆಯಾದರು. ವೇದಿಕೆಯಲ್ಲಿ ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷರಾದ ಮಾಧವಕುಂಬಾರ ಉಪಸ್ಥಿತರಿದ್ದರು. ವಲಯದ ಭಜನಾಮಂಡಳಿಗಳ ಪಧಾದಿಕಾರಿಗಳು ಹಾಗೂ ವಲಯದ ಸೇವಾಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆಯ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿ ವಂದಿಸಿದರು.

ಈ ಸುದ್ದಿಯನ್ನು ಓದಿದ್ದೀರಾ.?ಅಬ್ಬಾ.. 40 ಕೋಟಿಗೆ ಸೇಲ್‌ ಆದ ಹಸು ಇದು!

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ