• 26 ಜುಲೈ 2024

ಅಪಘಾತದಲ್ಲಿ ಗಾಯಗೊಂಡವರಿಗೆ ಧರ್ಮಸ್ಥಳ ಯೋಜನೆಯಿಂದ ಸಹಾಯಧನ ವಿತರಣೆ.              

 ಅಪಘಾತದಲ್ಲಿ ಗಾಯಗೊಂಡವರಿಗೆ ಧರ್ಮಸ್ಥಳ ಯೋಜನೆಯಿಂದ ಸಹಾಯಧನ ವಿತರಣೆ.              
Digiqole Ad

ಅಪಘಾತದಲ್ಲಿ ಗಾಯಗೊಂಡವರಿಗೆ ಧರ್ಮಸ್ಥಳ ಯೋಜನೆಯಿಂದ ಸಹಾಯಧನ ವಿತರಣೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕಡಬ ತಾಲೂಕು ಆಲಂಕಾರು ವಲಯದ ಕುಂತೂರು ಕಾರ್ಯಕ್ಷೇತ್ರದ ವಿಘ್ನೇಶ್ವರ ಪ್ರಗತಿಬಂಧು ಸಂಘದ ಸದಸ್ಶ ಹರಿಪ್ರಸಾದ್ ರವರು ಬೈಕ್ ಅಪಘಾತದಲ್ಲಿ ಕೈ ಕಾಲುಗಳಿಗೆ ತೀವ್ರತರದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಇವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಪೂಜ್ಯರು ವಿಶೇಷ ನೆಲೆಯಲ್ಲಿ ಮಂಜೂರು ಮಾಡಿರುವ ರೂ 20000ಮೊತ್ತದ ಸಹಾಯಧನ ಮಂಜೂರಾತಿ ಪತ್ರವನ್ನು ಅವರ ಸ್ವ ಗೃಹದಲ್ಲಿ ಗಾಯಾಳು ಹರಿಪ್ರಸಾದ್ ರವರಿಗೆ ವಿತರಿಸಲಾಯಿತು.

ಈ ಸುದ್ದಿ ಓದಿದ್ದೀರಾ?:ಸೈಡ್ ಕೊಡಲಿಲ್ಲವೆಂದು  ಕೆ.ಎಸ್.ಆರ್.ಟಿ ಎಸ್ ಆರ್ ಟಿ ಸಿ ಬಸ್ ಚಾಲಕನ ಮೇಲೆ ಹಲ್ಲೆ

ಮಂಜೂರಾತಿ ಪತ್ರವನ್ನು ವಿತರಿಸಿದ ಆಲಂಕಾರು ವಲಯ ಜನಜಾಗೃತಿ ವೇಧಿಕೆ ವಲಯಾಧ್ಯಕ್ಷರು ಇಂದು ಶೇಖರ ಶೆಟ್ಟಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಶ ವೀರೇಂದ್ರ ಹೆಗ್ಗಡೆಯವರು ಜನರ ಕಷ್ಟಗಳಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಸಹಾಯಗಳನ್ನು ಮಾಡುತ್ತಿದ್ದಾರೆ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಯಾವುದೇ ಬ್ಯಾಂಕ್ ಗಳು ಸಹಾಯಮಾಡಲು ಹಿಂಜರಿಯುವಾಗ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮೂಲಕ ಪ್ರಗತಿನಿಧಿ ಸಾಲಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ 13.5%ಕಡಿಮೆ ಬಡ್ಡಿಯಲ್ಲಿ ದೊರಕಿಸಿಕೊಟ್ಟು ಕುಟುಂಬದ ಮೂಲಸೌಕರ್ಯ ಹಾಗೂ ಕೃಷಿ ಅಭಿವೃಧ್ಧಿಗೆ ಶಕ್ತಿ ನೀಡಿದ್ದಾರೆ. ಪಡೆದ ಸಾಲದ ಮರುಪಾವತಿ ಸಂದರ್ಭ ಸಾಲ ಪಡೆದವರು ಅಥವಾ ಸಾಲವನ್ನು ವಿನಿಯೋಗಿಸಿದವರು ಮರಣ ಹೊಂದಿದ ಸಂದರ್ಭದಲ್ಲಿ ಸಾಲ ಕುಟುಂಬಕ್ಕೆ ಹೊರೆಯಾಗ ಬಾರದೆನ್ನುವ ದೂರದೃಷ್ಟಿಯಿಂದ 1000ಕ್ಕೆ 12ರೂ ಮೊತ್ತ ಪಾವತಿ ಮಾಡುವುದರೊಂದಿಗೆ ಪ್ರಗತಿರಕ್ಷಾ ಕವಚ ಎನ್ನುವ ವಿಮಾ ಕಾರ್ಯಕ್ರಮದ ಮೂಲಕ ಸಾಲಮನ್ನಾ ಮಾಡುವ ಯೋಜನೆ. ಬಾರತೀಯ ವಿಮಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಮೈಕ್ರೋಬಚಾತ್ ಹಾಗೂ ಭೀಮಾಜ್ಯೋತಿ ವಿಮೆ ಯನ್ನು ಮಾಡಿಕೊಂಡಲ್ಲಿ ಕುಟುಂಬದ ಆರ್ಥಿಕ ಭದ್ರತೆಗೂ ಸಹಕಾರಿಯಾಗಬಹುದು ಎನ್ನುವ ಸದುದ್ದೇಶದಿಂದ ವಿಮಾ ಪಾವತಿಗೆ ಸಂಘದಲ್ಲಿಯೇ ಸಾಲನೀಡುವ ವಿಶೇಷ ಸೌಲಭ್ಶ ಒದಗಿಸಿರುವುದು ಅದೆಷ್ಟೋ ಕುಟುಂಬಗಳಿಗೆ ಪ್ರಯೋಜನವಾಗಿದೆ …ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದು ಮನೆಯಲ್ಲಿಯೇ ವಿಶ್ರಾಂತಿ ಪಡೆಯುವವರಿಗೆ ˌಮಾರಕ ರೋಗಗಳಿಂದ ಬಳಲುತ್ತಿರುವವರಿಗೆ ವಿಕಲಚೇತನರಿಗೆ ವಿಶೇಷ ನೆಲೆಯಲ್ಲಿ ಸಹಾಯಧನ ಹಾಗೂ ಸಲಕರಣೆಗಳನ್ನು ನೀಡುತ್ತಿರುವ ಪೂಜ್ಶರ ಗ್ರಾಮಾಭಿವೃಧ್ಧಿ ಯೋಜನೆ ಪ್ರಶಂಸನೀಯ ಎಂದರು.

ಈ ಸುದ್ದಿ ಓದಿದ್ದೀರಾ?:ಕಾಡಾನೆಯ ಹಾವಳಿ ತಡೆಯಲು ನೇತಾಡುವ ಸೌರ ವಿದ್ಯುತ್ ಬೇಲಿ ಅಳವಡಿಕೆ

ಮಂಜೂರಾತಿ ಪತ್ರ ವಿತರಣೆ ಸಂಧರ್ಭ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯಾಧ್ಶಕ್ಷರಾದ ಉಮೇಶ್ ಶೆಟ್ಟಿˌಮಾಜಿ ವಲಯಾಧ್ಶಕ್ಷರು ಭಾಲಕೃಷ್ಣ ಗೌಡ ಪಾಲೇಚ್ಚಾರ್ ˌವಲಯ ನವಜೀವನಸಮಿತಿಯ ಅಧ್ಶಕ್ಷರಾದ ನಾಗಪ್ಪಗೌಡ ಪಾಲೇಚ್ಚಾರ್ , ಮೇಲ್ವೀಚಾರಕಿ ಯಶೋಧ ಸೇವಾಪ್ರತಿನಿಧಿ ಸವಿತಾ ಪಲಾನುಭವಿಯ ಸಂಬಂಧಿಕರಾದ ಮೊನಪ್ಪಗೌಡ ಕುಂಟ್ಯಾಣ ಉಪಸ್ಥಿತರಿದ್ದರು.

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ